Labour ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!

Labour Safety

ಸುರಕ್ಷತೆಗೆ ಹೆಚ್ಚಿನ ಆದ್ಯತೆ, ಇದನ್ನೇ ಆಂಗ್ಲ ಭಾಷೆಯ ಪ್ರಿಕಾಶನ್ ಇಸ್ ಬೆಟರ್ ದ್ಯಾನ್ ಕ್ಯೂರ್ (Precaution is better than Cure) ಎಂಬ ಸ್ಲೋಗನ್ ಕೂಡ ಇದನ್ನು ಪುಷ್ಟೀಕರಿಸುತ್ತದೆ. ಅ’ಪ’ಘಾ’ತಗಳನ್ನು ಯಾರು ನಿರೀಕ್ಷಿಸುವುದಿಲ್ಲ ಆದರೆ ಅಂತಹ ಸಂಭವವಿದ್ದ ಸಮಯದಲ್ಲಿ ಎಚ್ಚರಿಕೆಯಿಂದ ಇರುವುದು ಕೂಡ ತಪ್ಪಲ್ಲ.

WhatsApp Group Join Now
Telegram Group Join Now

ದಿನನಿತ್ಯದ ಬದುಕಿನಲ್ಲಿ ಅಚಾನಕ್ ಎದುರಾಗುವ ಇಂತಹ ಸಂದರ್ಭಗಳ ಬಗ್ಗೆ ಆತಂಕವಿದ್ದರೆ ಕೈಗಾರಿಕೆಗಳು ಹಾಗೂ ಕಟ್ಟಡ ಮತ್ತು ಇನ್ನಿತರೆ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರುಗಳು ಪ್ರತಿನಿತ್ಯವೂ ಇಂತಹದೊಂದು ಹೋರಾಟದೊಂದಿಗೆ ಸೆಣೆಸಾಡಬೇಕಾಗಿರುತ್ತದೆ.

ಹೀಗಾಗಿ ಇಂತಹ ಕಾರ್ಮಿಕರ ಪ್ರಾಣ ರಕ್ಷಣೆಯ ಉದ್ದೇಶದಿಂದ ಈ ಬಗ್ಗೆ ಜಾಗ್ರತೆ ಮೂಡಿಸಲು ರಾಷ್ಟ್ರೀಯ ಸುರಕ್ಷತಾ ದಿನ ಆಚರಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಮತ್ತು ಕಾರ್ಮಿಕರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಅಂತೆಯೇ ಹತ್ತಿರವಾಗಿರುವ ರಾಷ್ಟ್ರೀಯ ಸುರಕ್ಷತಾ ದಿನ (National Safety day) ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರದ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯು ಕಟ್ಟಡ ನಿರ್ಮಾಣ, ಜಲಾಶಯ ನಿರ್ಮಾಣ ಮತ್ತು ಇಂತಹ ಎತ್ತರ ಸ್ಥಳಗಳಲ್ಲಿ ನಿಂತು ಕೆಲಸ ಮಾಡಬೇಕಾದ ಕಾರ್ಮಿಕರುಗಳಿಗೆ ಆ ಸಮಯದಲ್ಲಿ ಎದುರಾಗಬಹುದಾದ ಅಪಾಯಗಳಿಂದ ರಕ್ಷಿಸಿಕೊಳ್ಳುವ ಉದ್ದೇಶದಿಂದ ಸುರಕ್ಷತೆಗಾಗಿ ಸೇಫ್ಟಿನೆಟ್ (Safety) ಬಳಸುವಂತೆ ಕೋರಿಕೊಂಡಿದೆ.

ಸೇಫ್ಟಿ ನೆಟ್ ಬಳಕೆ ಬಗ್ಗೆ ಜಾಹಿರಾತುಗಳನ್ನು ರೂಪಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಜಾಹಿರಾತುಗಳಲ್ಲಿ ಪ್ರಮುಖವಾಗಿ ಸೇಫ್ಟಿ ನೆಟ್ ಬಳಕೆಯ ಎರಡು ಅಂಶಗಳ ಬಗ್ಗೆ ತಿಳಿಸಲಾಗಿದೆ. ಕಾರ್ಮಿಕರಿಗೂ ಕಟ್ಟಡಗಳ ಮೇಲೆ ನಿಂತು ಅಥವಾ ಎತ್ತರದ ಸ್ಥಳಗಳಲ್ಲಿ ನಿರ್ಮಾಣ ಕಾರ್ಯ ಮಾಡುವಾಗ ಸೇಫ್ಟಿ ನೆಟ್ ಬಳಸಿ, ಕೆಲಸದ ಸ್ಥಳಗಳಲ್ಲಿ ಆಯತಪ್ಪಿ ಕಾರ್ಮಿಕರು ಕೆಳಗೆ ಬಿದ್ದಾಗ ಇದು ಕಾರ್ಮಿಕರ ಪ್ರಾಣಕ್ಕೆ ರಕ್ಷಣೆಯನ್ನು ನೀಡುತ್ತದೆ.

ಆ ಸಂದರ್ಭದಲ್ಲಿ ಆಗಬಹುದಿದ್ದ ಪ್ರಾಣಹಾನಿ ಯಂತಹ ಮಹತ್ಕಾರ್ಯವು ಈ ಸೇಫ್ಟಿನೆಟ್ ಎನ್ನುವ ಸಣ್ಣ ಎಚ್ಚರಿಕೆಯಿಂದ ಸಾಧ್ಯವಾಗುತ್ತದೆ. ಹಾಗಾಗಿ ಇಂತಹ ಅಪಾಯ ಸ್ಥಳಗಳಲ್ಲಿ ಸೇಫ್ಟಿನೆಟ್ ಬಳಸಲು ಕೇಳಿಕೊಳ್ಳಲಾಗಿದೆ. ಅದೇ ರೀತಿಯಾಗಿ ಎತ್ತರದ ಸ್ಥಳಗಳಲ್ಲಿ ನಿಂತು ಕೆಲಸ ಮಾಡುತ್ತಿವಾಗ ಕೆಲಸಕ್ಕೆ ಬಳಸಲಾಗುವ ಯಂತ್ರೋಪಕರಣಗಳು ಅಥವಾ ಇನ್ಯಾವುದೇ ಬೆಲೆ ಬಾಳುವ ವಸ್ತುಗಳು ಇದ್ದರೆ ಕೂಡ ಅವುಗಳು ಆಯುತಪ್ಪಿ ಕೆಳಕ್ಕೆ ಬಿದ್ದರೆ ಆಗುವ ನ’ಷ್ಟವು ಕೂಡ ಅಪಾರ.

ಅಂತಹ ಸಂದರ್ಭಗಳಲ್ಲಿ ಕೂಡ ಸೇಫ್ಟಿ ಬಳಕೆಯಿಂದ ಮುಖ್ಯವಾದ ವಸ್ತು ಕೆಳಗೆ ಬಿದ್ದು ನಷ್ಟವಾಗುವುದನ್ನು ತಪ್ಪಿಸಬಹುದು ಹಾಗಾಗಿ ಸೇಫ್ಟಿನೆಟ್ ಬಳಕೆಗೆ ಬಗ್ಗೆ ಕಾರ್ಮಿಕರಿಗೆ ಉತ್ತೇಜಿಸಲಾಗುತ್ತಿದೆ. ಇಂತಹ ಸೇಫ್ಟಿ ನೆಟ್ ಗಳನ್ನು ನಿರ್ಮಾಣ ಕಾರ್ಯಗಳಲ್ಲಿ ಕಾರ್ಮಿಕರಿಕ ರಕ್ಷಣೆಗಾಗಿ ಮಾತ್ರವಲ್ಲದೆ ಮನೆಗಳಲ್ಲಿಯೂ ಸಹ ಬಾಲ್ಕನಿಗಳಿದ್ದರೆ ಬಾಲ್ಕನಿಗಳಿಗೆ ಕೂಡ ಹಾಕಲಾಗುತ್ತದೆ.

ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅಥವಾ ರೋಗಿಗಳು, ವಯಸ್ಸಾದವರು ಇದ್ದಾಗ ಆಯತಪ್ಪಿ ಬೀಳಬಹುದೆನ್ನುವ ಮುನ್ನೆಚ್ಚರಿಕೆಯಿಂದ ಹಾಗೂ ತೆಂಗಿನ ಮರ ತೆಂಗಿನ ಮರದಂತಹ ಎತ್ತರದ ಮರಗಳನ್ನು ಏರಿ ಕೆಲಸ ಮಾಡಬೇಕಾದ ಸಂದರ್ಭ ಬಂದಾಗ ವಸ್ತುವು ಕೆಳಗೆ ಬಿದ್ದು ಹಾಳಾಗದಂತೆ, ನಷ್ಟವಾಗದಂತೆ ತಡೆಗಟ್ಟಲು ಹಾಗೂ ಕೆಲಸಗಾರರು ಆಯತಪ್ಪಿ ಬಿದ್ದು ಕೆಲಸ ಆತನಿಗೆ ಅಪಾಯವಾಗಬಾರದು ಎನ್ನುವ ಉದ್ದೇಶದಿಂದ ಇಂತಹ ಸೇಫ್ಟಿನೆಟ್ ಗಳನ್ನು ಬಳಸಬಹುದು. ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment