Shakthi Scheme: ಫ್ರೀ ಬಸ್ ನಲ್ಲಿ ಸಂಚಾರ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್.!

Shakthi Scheme

ರಾಜ್ಯ ಸರ್ಕಾರ ಕರ್ನಾಟಕದ ಜನತೆಗೆ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಮೊದಲನೆಯ ಯೋಜನೆಯಾಗಿ ಶಕ್ತಿ ಯೋಜನೆ (Shakti Yojane) ಜಾರಿಗೆ ಬಂದು, ಕಳೆದ ಒಂದೂವರೆ ವರ್ಷದಿಂದ ಯಶಸ್ವಿಯಾಗಿ ಚಾಲ್ತಿಯಲ್ಲಿದೆ. ಆರಂಭದಲ್ಲಿ ಶಕ್ತಿ ಯೋಜನೆಯ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಲಾಗಿದ್ದರೂ ನಿಧಾನವಾಗಿ ಯೋಜನೆಯ ಪ್ರಯೋಜನಗಳ ಬಗ್ಗೆ ಎಲ್ಲರೂ ಪ್ರಶಂಸೆಯ ಮಾತುಗಳನ್ನು ಆಡುತ್ತಿದ್ದಾರೆ.

WhatsApp Group Join Now
Telegram Group Join Now

ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಮಹಿಳೆಯರು ಹೆಚ್ಚಾಗಿ ಧಾರ್ಮಿಕ ಕ್ಷೇತ್ರಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಭಾಗಿಯಾಗುತ್ತಿದ್ದಾರೆ ಹೀಗಾಗಿ ಶಕ್ತಿ ಯೋಜನೆಯ ಮಹಿಳೆಯರಿಗೆ ಆರ್ಥಿಕ ಹೊರೆ ಕಡಿಮೆಗೊಳಿಸಿ ಹೊರ ಜಗತ್ತಿನೊಂದಿಗೆ ಆಕೆಯ ತೊಡಗಿಕೊಳ್ಳುವಿಕೆಯನ್ನು ಹೆಚ್ಚುಗೊಳಿಸಿದೆ ಎನ್ನುವುದನ್ನು ಒಪ್ಪಬಹುದು.

ಆದರೆ ಸದ್ಯಕ್ಕೆ ಈಗ ಈ ಬಗ್ಗೆ ಇರುವ ಒಂದೇ ಸಮಸ್ಯೆ ಏನೆಂದರೆ, ಶಕ್ತಿ ಯೋಜನೆ ಇರುವುದು ರಾಜ್ಯದ ಮಹಿಳೆಯರಿಗಾಗಿ. ರಾಜ್ಯದಲ್ಲಿ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲ ಮಹಿಳೆಯರು ಸರ್ಕಾರದ ಯಾವುದಾದರು ಒಂದು ಗುರುತಿನ ಚೀಟಿಯನ್ನು ತೋರಿಸಿ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ರಾಜ್ಯದ ನಾಲ್ಕು ನಿಗಮದ ಯಾವುದೇ ಬಸ್ ಗಳಲ್ಲಿ ಬೇಕಾದರೂ ರಾಜ್ಯದ ಗಡಿಯೊಳಗೆ ಉಚಿತವಾಗಿ ಪ್ರಯಾಣ ಮಾಡಬಹುದು.

ನಿರ್ವಾಹಕರು ಮಹಿಳೆಯರು ತೋರಿಸುವ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ DL ಇತ್ಯಾದಿ ಆಧಾರಗಳನ್ನು ನೋಡಿ ಉಚಿತ ಪ್ರಯಾಣಕ್ಕೆ ಟಿಕೆಟ್ (free ticket) ನೀಡುತ್ತಾರೆ ಆದರೆ ಈ ರೀತಿ ಟಿಕೆಟ್ ಮಾಡುವ ಮುನ್ನ ನಿರ್ವಾಹಕರು ಅವರ ಆಧಾರ್ ಕಾರ್ಡ್ ಪರಿಶೀಲಿಸಿ ಅವರದ್ದೇ ಅಲ್ಲವೇ ಎಂದು ಕನ್ಫರ್ಮ್ ಮಾಡಿಕೊಳ್ಳಬೇಕು. ಮತ್ತು ವಿಳಾಸವನ್ನು ಕೂಡ ನೋಡಿ ರಾಜ್ಯದವರೇ? ಅಲ್ಲವೇ? ಎನ್ನುವುದನ್ನು ಪರಿಶೀಲಿಸಿ ಟಿಕೆಟ್ ವಿತರಿಸಬೇಕು.

ಹೀಗಾಗಿ ನಿರ್ವಾಹಕರಿಗೆ ಇದು ಹೆಚ್ಚಿನ ಒತ್ತಡ ನೀಡುತ್ತಿದೆ. ಅಲ್ಲದೆ ಪೀಕ್ ಹವರ್ ಳಲ್ಲಿ ಈ ರೀತಿ ಪರಿಶೀಲಿಸಿ ಟಿಕೆಟ್ ನೀಡುವವರೆಗೂ ಬಸ್ ಗಳನ್ನು ನಿಲ್ಲಿಸಬೇಕಾಗುತ್ತದೆ. ಇದರಿಂದ ಬಸ್ ವಿಳಂಬವಾಗಿ ಎಲ್ಲರಿಗೂ ಸಮಸ್ಯೆ ಆಗುತ್ತಿದೆ ಹಾಗಾಗಿ ಈ ಸಮಸ್ಯೆ ಪರಿಹಾರವಾಗಿ ಸ್ಮಾರ್ಟ್ ಕಾರ್ಡ್ (Smart Card) ನೀಡಿದರೆ ಉತ್ತಮ ಎನ್ನುವುದನ್ನು ಈ ಮೊದಲೇ ನಿರ್ಧರಿಸಲಾಗಿತ್ತು.

ಸ್ಮಾರ್ಟ್ ಕಾರ್ಡ್ ಗಳನ್ನು ರಾಜ್ಯದ ನಿವಾಸಿಗಳೆಂಬ ದೃಢೀಕರಣದೊಂದಿಗೆ ಆಧಾರ್ ಕಾರ್ಡ್ ಹಾಗೂ ಭಾವಚಿತ್ರ ಇತ್ಯಾದಿ ಅಗತ್ಯ ಮಾಹಿತಿಗಳೊಂದಿಗೆ ಹೊಂದಿಸಿ ನೀಡುವುದರಿಂದ ಹೊರ ರಾಜ್ಯದವರು ವಂಚಿಸಿ ಪ್ರಯಾಣಿಸುವುದು ತಪ್ಪುತ್ತದೆ, ರಾಜ್ಯದ ಫಲಾನುಭವಿಗಳಿಗೆ ಮಾತ್ರ ಇದರ ಪ್ರಯೋಜನ ಸಿಗುತ್ತದೆ ಎಂದು ಯೋಜನೆ ರೂಪಿಸಲಾಗಿತ್ತು ಆದರೆ ಈ ಸ್ಮಾರ್ಟ್ ಕಾರ್ಡ್ ವಿತರಣೆಗೂ ಕೂಡ ಹೆಚ್ಚಿನ ಮೊತ್ತದ ಬಜೆಟ್ ನ ಅಗತ್ಯ ಇದ್ದಿದರಿಂದ ಇದನ್ನು ಸರ್ಕಾರ ಮುಂದೂಡುತ್ತಾ ಬಂದಿತ್ತು.

ಆದರೆ ತೀರ ಇತ್ತೀಚಿಗೆ ಈ ರೀತಿ ಹೊರ ರಾಜ್ಯದವರು ಕೂಡ ದಾಖಲೆಗಳನ್ನು ಬದಲಾಯಿಸಿ ಉಚಿತ ಬಸ್ ಪ್ರಯಾಣದ ಅನುಕೂಲತೆಯನ್ನು ಪಡೆಯುತ್ತಿದ್ದಾರೆ. ಇದರಿಂದ ನಮ್ಮ ಸಂಪನ್ಮೂಲದ ಸೋರಿಕೆ ಮಾತ್ರವಲ್ಲದೆ ಸರ್ಕಾರದ ಬೊಕ್ಕಸಕ್ಕೆ ಭಾರಿ ಮೊತ್ತದ ನಷ್ಟವು ಆಗುತ್ತಿರುವುದರಿಂದ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಹೆಚ್ಚಿನ ನಿಗಾ ವಹಿಸಿದೆ.

ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರೇ (Ramalinga Reddy) ಇದಕ್ಕೆ ಪ್ರತಿಕ್ರಿಯಿಸಿ ಶೀಘ್ರದಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ರೀತಿ ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ಶಕ್ತಿ ಯೋಜನೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಗಮನ ಹರಿಸಿದೆ ಎಂದು TNIE ವರದಿ ಮಾಡಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment