Banking
ವಿದ್ಯಾಭ್ಯಾಸ ಮುಗಿದ ತಕ್ಷಣ ಮುಂದಿನ ಪ್ರಶ್ನೆ ಎದುರಾಗುವುದೇ ಉದ್ಯೋಗದ ಬಗ್ಗೆ ಕೆಲವು ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಒಂದು ಗುರಿ ಇಟ್ಟು ಕೊಂಡಿರುತ್ತಾರೆ ಹಾಗೂ ಅದೇ ಹುದ್ದೆ ಸೇರಬೇಕೆಂದು ಹಗಲು ರಾತ್ರಿ ಶ್ರಮಪಟ್ಟು ಓದಿ ಆ ಹಂತ ತಲುಪುತ್ತಾರೆ ಆದರೆ ಇನ್ನೂ ಕೆಲವರ ಪರಿಸ್ಥಿತಿ ಜೀವನಕ್ಕೆ ತಕ್ಕಂತೆ ಬದಲಾಗುತ್ತದೆ.
ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಉದ್ಯೋಗದ ಭದ್ರತೆಯೇ ಅತಿ ಮುಖ್ಯವಾಗಿರುವುದರಿಂದ ವಿದ್ಯಾಭ್ಯಾಸ ಮುಗಿದ ಕೂಡಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ಯಾವುದಾದರೂ ಸರ್ಕಾರಿ ಹುದ್ದೆ ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹುದ್ದೆಗೆಟ್ಟಿಸಿಕೊಂಡು ಲೈಫ್ ನಲ್ಲಿ ಸೆಟಲ್ ಆಗಬೇಕು ಎನ್ನುವುದೇ ಯುವಜನತೆಯ ಗುರಿ.
ನೀವು ಕೂಡ ಇದೇ ರೀತಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಿಯಾಗಲು ಬಯಸುತ್ತಿದ್ದರೆ ಈ ಪರೀಕ್ಷೆಗಳನ್ನು ಎದುರಿಸುವ ತರಬೇತಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಸಾಮಾನ್ಯವಾಗಿ B. com, M. com ವಿದ್ಯಾಭ್ಯಾಸ ಮಾಡಿದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಬ್ಯಾಂಕಿಂಗ್ ಕ್ಷೇತ್ರದ ಹುದ್ದೆಗಳನ್ನು ಹುಡುಕುತ್ತಾರೆ ಅಥವಾ ಯಾವುದೋ ಹುದ್ದೆಯಲ್ಲಿದ್ದು ವರ್ಷಗಳಾದ ಬಳಿಕ ಮರಳಿ ಗುರಿ ಕಡೆಗೆ ಹೊರಳುವವರು ಇದ್ದಾರೆ.
ಇವುಗಳಲ್ಲಿ ನೀವು ಯಾವುದೇ ವಿಭಾಗಕ್ಕೆ ಸೇರಿದ್ದರು ಬ್ಯಾಂಕಿಂಗ್ ಕ್ಷೇತ್ರದ ಹುದ್ದೆಗಳನ್ನು ಪಡೆಯುವುದು ಅಷ್ಟು ಸುಲಭಕರ ಅಲ್ಲ ಎನ್ನುವುದು ತಿಳಿದಿರಬೇಕು. ನಾವು ಶಾಲಾ ಶಿಕ್ಷಣದಲ್ಲಿ ಕಲಿಯುವುದು ಬೇರೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾಗಿರುವ ಜ್ಞಾನವೇ ಬೇರೆ. ಇದಕ್ಕೆ ಸರಿಯಾದ ತರಬೇತಿ ಮುಖ್ಯ ಈ ತರಬೇತಿಯಲ್ಲಿ ನಮ್ಮ ಜ್ಞಾನಮಟ್ಟ ಮಾತ್ರ ಹೆಚ್ಚಿಸುವುದು ಮಾತ್ರವಲ್ಲದೆ ಸಾಮಾನ್ಯ ಜ್ಞಾನ ಅಭಿವೃದ್ಧಿ ಪಡಿಸುವುದರ ಜೊತೆಗೆ ಒಂದು ಶಿಸ್ತು ಬದ್ಧ ಜೀವನ ಹಾಗೂ ಸನ್ನಿವೇಶಗಳನ್ನು ಎದುರಿಸುವ ಎಲ್ಲಾ ಸ್ಕಿಲ್ ಗಳನ್ನು ಕೂಡ ಕಲಿಯಬಹುದು.
ಅಲ್ಲದೆ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕೂಡ ಲಿಖಿತ ಪರೀಕ್ಷೆ ಜೊತೆಗೆ ಸ್ಕಿಲ್ ಟೆಸ್ಟ್, ಇಂಟರ್ವ್ಯೂ ಮಾರ್ಕ್ ಕೂಡ ಮುಖ್ಯವಾಗಿರುವುದರಿಂದ ಇದನ್ನೆಲ್ಲ ನಿಭಾಯಿಸುವ ಕೌಶಲ್ಯ ಕಲಿಸುವ ತರಬೇತಿಯನ್ನು ಒಮ್ಮೆ ಪಡೆದು ನಂತರ ಪ್ರಯತ್ನಿಸಿದರೆ ಕಡಿಮೆ ಅವಧಿಯಲ್ಲಿ ವೇಗವಾಗಿ ಗುರಿ ಮುಟ್ಟಬಹುದು.
ಆದರೆ ಈ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಬೆಲೆಯು ಕೂಡ ಗಗನಕ್ಕೇರಿದೆ. ಕಾಲೇಜು ವಿದ್ಯಾಭ್ಯಾಸ ಮುಗಿಸುವುದು ಹೆಚ್ಚಾಗಿರುವ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೇರಿ ಲಕ್ಷ ಲಕ್ಷ ದುಡ್ಡು ಸುರಿವ ಶಕ್ತಿ ನಮಗಿಲ್ಲ ಇನ್ನಿತರ ಕಾರಣಗಳು ನಿಮಗಿದ್ದರೆ ನಿಮ್ಮ ಸಹಾಯಕ್ಕೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (KSOU) ನಿಂತಿದೆ.
ಕಳೆದ ಹಲವಾರು ವರ್ಷಗಳಿಂದ UPSC ನಡೆಸುವ ಪರೀಕ್ಷೆಗಳು ಸೇರಿದಂತೆ, KPSC ವಿವಿಧ ಹುದ್ದೆಗಳ ಪರೀಕ್ಷೆಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಜೊತೆಗೆ UaGC, NET, K-SET, PDO, ಬ್ಯಾಂಕಿಂಗ್ ಸಹಿತ ವಿವಿಧ ಸರ್ಕಾರಿ ನೇಮಕಾತಿಗಳ ಪ್ರವೇಶ ಪರೀಕ್ಷೆಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ.
ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ KSOU ಈಗ ಮತ್ತೊಮ್ಮೆ ಬ್ಯಾಂಕಿಂಗ್ ಕ್ಷೇತ್ರದ ಹುದ್ದೆಗಳಿಗೆ ಉಚಿತವಾಗಿ ತರಬೇತಿಗೆ ಆರಂಭಿಸಿದೆ ಇದನ್ನು ಪಡೆದುಕೊಳ್ಳುವುದು ಹೇಗೆ? ಎನ್ನುವುದರ ಕುರಿತ ಹೆಚ್ಚಿನ ವಿವರ ಹೀಗಿದೆ ನೋಡಿ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ 45 ದಿನಗಳ ಕಾಲ ತರಬೇತಿ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. SBI ಸಹಿತ ವಿವಿಧ ಬ್ಯಾಂಕ್ ಗಳ ಗುಮಾಸ್ತರು ಹಾಗೂ ಅಧಿಕಾರಿಗಳ ಹುದ್ದೆಗಳ ಪರೀಕ್ಷೆಗೆ ತರಬೇತಿಯನ್ನು ನೀಡುತ್ತಿದ್ದು ಇದಕ್ಕೆ B. com, MBA, ಇಲ್ಲವೇ ಕೃಷಿ ಸಹಿತ ಯಾವುದೇ ವಿಷಯದಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬ್ಯಾಂಕ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪ್ರಸ್ತುತ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವವರು, ವಿಷಯ ತಜ್ಞರು ನಿತ್ಯ ಮೂರು ಗಂಟೆಗಳ ಕಾಲ ತರಬೇತಿ ನೀಡಲಿದ್ದಾರೆ. ಜೊತೆಗೆ ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಬ್ಯಾಂಕಿಂಗ್ ಪರೀಕ್ಷೆಗಳಲ್ಲಿನ ವಿವಿಧ ವಿಷಯಗಳ ತಜ್ಞರು ಈ ಕೇಂದ್ರದೊಂದಿಗೆ ಒಡನಾಟ ಹೊಂದಿದ್ದು ವಿಷಯ ತಜ್ಞರಾಗಿ ಭಾಗಿಯಾಗಲಿದ್ಧಾರೆ.
ಆರ್ಥಿಕವಾಗಿ ಯಾವುದೇ ಹೊರೆ ಇಲ್ಲದೆ ತಿಂಗಳ ನೋಂದಣಿಗೆ 500 ರೂ. ಕಡಿಮೆ ಶುಲ್ಕದಲ್ಲಿ ಈ ತರಬೇತಿ ಪಡೆಯಬಹುದು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:-
1.0ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ – 9448800816
2. ಕಚೇರಿ ದೂರವಾಣಿ ಸಂಖ್ಯೆ – 0821 2515944