Drought relief
ಭಾರತದಲ್ಲಿ ವ್ಯವಸಾಯವು ಮಳೆ ಜೊತೆ ಆಡುವ ಜೂಜಾಟ ಎನ್ನುವ ಪರಿಸ್ಥಿತಿಗೂ ಇಂದಿಗೂ ಬದಲಾಗಿಲ್ಲ. ತೀರ ಇತ್ತೀಚಿಗೆ ನೋಡುವುದಾದರೂ ಕಳೆದೆರಡು ವರ್ಷಗಳು ಭೀಕರ ಬರಗಾಲದ ಪರಿಸ್ಥಿತಿಯನ್ನು ರಾಜ್ಯದ ರೈತರು ಎದುರಿಸಿದ್ದರೆ, 2024-25 ನೇ ಸಾಲಿನ ಹಿಂಗಾರಿನಲ್ಲಿ ಅತಿವೃಷ್ಟಿ ಪ್ರವಾಹದ ಸಂಕಷ್ಟಗಳನ್ನು ಎದುರಿಸುವಂತಹಾಯಿತು.
ಕೊಯ್ಲಿಗೆ ಬಂದ ಫಸಲು ಅಕಾಲ ಮಳೆಯಿಂದಾಗಿ ಸಂಪೂರ್ಣ ನೆಲ ಕಚ್ಚಿ, ರೈತನ ಸಾಲದ ಹೊರೆ ಹೆಚ್ಚಿಸಿದೆ. ಇದನ್ನು ಅರಿತ ಸರ್ಕಾರವು (Crop loss compensation for Farmers) ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಬೆಳೆ ಹಾನಿಗೆ ಒಳಗಾದ ರೈತರಿಗೆ ರಾಜ್ಯ ಸರ್ಕಾರದ ವತಿಯಿಂದ ಬೆಳೆ ಹಾನಿ(Drought relief) ಪರಿಹಾರ ಸಿಗುತ್ತದೆ.
ಅಂತೆಯೇ ಪ್ರಸ್ತುತ ಸಾಲಿನಲ್ಲಿ ಮಳೆ ಪ್ರಭಾವದಿಂದಾಗಿ ಬೆಳೆ ಹಾನಿಗೆ ಒಳಗಾದ ರೈತನ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಹಣವನ್ನು ಜಮೆ ಮಾಡಿದೆ. ಇದು ರೈತನ ಸಂಪೂರ್ಣ ನಷ್ಟವನ್ನು ಭರ್ತಿ ಮಾಡದೆ ಹೋದರು ಸದ್ಯದ ಪರಿಸ್ಥಿತಿಗೆ ರೈತನಿಗೆ ಇದರಿಂದ ಬಹಳ ಅನುಕೂಲವಾಗಲಿದೆ. ಯಾವ ರೈತರಿಗೆ ಪರಿಹಾರ ಹಣ ಸಿಗುತ್ತಿದೆ ಮತ್ತು ಯಾವ ರೂಪದಲ್ಲಿ ಸಿಗುತ್ತದೆ ಎನ್ನುವ ಮಾಹಿತಿ ಹೀಗಿದೆ ನೋಡಿ.
ಧಾರವಾಡ (Dharwad) ಜಿಲ್ಲೆಯಾದ್ಯಂತ ಅಕ್ಟೋಬರ್ ತಿಂಗಳಿನಲ್ಲಿ ಮಳೆ ವೈಪರೀತ್ಯದಿಂದಾಗಿ ಅಧಿಕ ಮಳೆ ಹೊಡೆತಕ್ಕೆ ಸಿಕ್ಕ ಆ ಭಾಗದ ರೈತನ ಬೆಳೆಗಳು ಹಾನಿಯಾಗಿದ್ದವು. ಅಂತೆಯೇ ಆ ಭಾಗದ ರೈತರಿಂದ ಬೆಳೆ ಹಾನಿ ಮನವಿ ಕೂಡ ಸಲ್ಲಿಕೆ ಆಗಿತ್ತು. ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐ ಡಿ ಹೊಂದಿರುವಂತಹ ರೈತರ ಬೆಳೆ ಹಾನಿಯ ಅಂತಿಮ ಜಂಟಿ ಸಮೀಕ್ಷೆ ವರದಿ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ಈಗ ಹಂತ ಹಂತವಾಗಿ ಧಾರವಾಡ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಹಣವನ್ನು ಜಮೆ ಮಾಡಲಾಗುತ್ತಿದೆ.
ಈ ಕುರಿತಾಗಿ ಮಾಹಿತಿಯನ್ನು ಸ್ವತಃ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿರುವ ದಿವ್ಯ ಪ್ರಭು ಅವರೇ ಪತ್ರಿಕಾ ಪಕಟಣೆ ಮೂಲಕ ಹಂಚಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಹಂಚಿಕೊಂಡ ಮಾಹಿತಿಯ ಪ್ರಕಾರವಾಗಿ ಬೆಳೆ ಹಾನಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಒಟ್ಟು ರೂ. 560 ಕೋಟಿ ಅನುದಾನ ದೊರೆತಿದೆ.
ಇನ್ನು ಪರಿಹಾರ ಹಣವು ರೈತರ ಖಾತೆಗೆ ಜಮೆ ಆಗುವುದು ಕುರಿತಾಗಿ ಸ್ಪಷ್ಟತೆ ನೀಡಿದ ಅವರು ಮೊದಲನೇ ಹಾಗೂ ಎರಡನೇ ಹಂತದಲ್ಲಿ ಒಟ್ಟಾಗಿ ಧಾರವಾಡ ಜಿಲ್ಲೆಯ 7 ತಾಲೂಕಿನ 69,573 ರೈತ ಫಲಾನುಭವಿಗಳಿಗೆ ಹಣ ಜಮೆಯಾಗಿದೆ. ಒಟ್ಟು 55.809 ಹೆಕ್ಟರಿಗೆ ರೂ. 48.45 ಕೋಟಿ ಇನ್ಪುಟ್ ಸಬ್ಸಿಡಿಯನ್ನು ಮೊದಲ ಹಂತದಲ್ಲಿ ಹಾಗೂ 50,515 ಫಲಾನುಭವಿಗಳಿಗೆ 48.102 ಹೆಕ್ಟೇರ್ ಳಿಗೆ ಅನ್ವಯವಾಗುವ ರೂ.4211.17 ಲಕ್ಷ ಹಣವನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ, ರೈತರ ಬೆಳೆ ಪರಿಹಾರದ ಹಣವು ನೇರವಾಗಿ DBT ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿದೆ. ಯಾವುದೇ ಮಧ್ಯವರ್ತಿಯ ಕಾಟವಿಲ್ಲದೇ, ನೇರವಾಗಿ ಫಲಾನುಭವಿಗೆ ಅನುದಾನ ದೊರೆತಿದೆ. ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆ ಫಲಾನುಭವಿ ಆಗಿದ್ದ ರೈತರುಗಳು ಈ ರೀತಿ ಸಂಕಷ್ಟದ ಸಮಯದಲ್ಲಿ ನೆರವನ್ನು ಪಡೆದಿದ್ದಾರೆ. ರೈತರು ಸರ್ಕಾರದ ಈ ಬಗೆಯ ಯೋಜನೆ ಪ್ರಯೋಜನಗಳನ್ನು ಪಡೆಯುವಂತಾಗಲಿ ಎನ್ನುವುದೇ ಈ ಅಂಕಣದ ಆಶಯ.