Tractor: ಟ್ರಾಕ್ಟರ್ ಖರೀದಿಗೆ 50% ರಷ್ಟು ಸಹಾಯಧನ ಘೋಷಣೆ.!

Tractor

ಇಂದು ಕೃಷಿ (Agriculture) ಕೂಡ ಸಾಕಷ್ಟು ಆಧುನಿಕರಣಗೊಂಡಿದೆ. ಯಂತ್ರೋಪಕರಣ(Tractor) ಹಾಗೂ ವೈಜ್ಞಾನಿಕ ವಿಧಾನ ಪದ್ದತಿ ಅನುಸರಣೆಯಿಂದ ರೈತನ (Farmers) ಕಷ್ಟ ಕಡಿಮೆಯಾಗುವುದರ ಜೊತೆಗೆ ಕೆಲಸದ ಒತ್ತಡ ಕೂಡ ಕಡಿಮೆ ಆಗುತ್ತಿದೆ. ಹೀಗಾಗಿ ಸರ್ಕಾರಗಳು ಕೂಡ ರೈತನಿಗೆ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹಿಸುವ ಸಲುವಾಗಿ ಕೃಷಿ ಯಂತ್ರ ಧಾರೆ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ (Agriculture Products Processing Scheme) ಹಾಗೂ ಈ ರೂಪದ ಯೋಜನೆಗಳನ್ನು ಜಾರಿಗೊಳಿಸಿದೆ.

WhatsApp Group Join Now
Telegram Group Join Now

ಈ ಯೋಜನೆ ಅನುಕೂಲತೆಯಿಂದ ರೈತನು ಸರ್ಕಾರದ ಸಹಾಯದಿಂದ ಅಥವಾ ಸಬ್ಸಿಡಿ ಬೆಲೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಬಹುದು. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯು ಉಳಿಮೆ ಕೆಲಸದಿಂದ ಹಿಡಿದು ಕಟಾವಿನವರೆಗೆ ಬಳಸಲಾಗುವ ಬಹುತೇಕ ಎಲ್ಲಾ ಯಂತ್ರೋಪಕರಣಗಳ ಖರೀದಿಗೂ ಈ ಯೋಜನೆಯಡಿ ಅನುದಾನ ನೀಡುತ್ತದೆ.

ಪ್ರಸ್ತುತವಾಗಿ ಕೃಷಿ ಯಂತ್ರಧಾರೆ ಹಾಗೂ ಕೃಷಿ ಯಂತ್ರೋಪಕರಣ ಯೋಜನೆ ಮೂಲಕ ಶೇಕಡ 50% ರಷ್ಟು ರೈತನಿಗೆ ಯಂತ್ರೋಪಕರಣಗಳ ಖರೀದಿಗೆ ಅನುದಾನ ಸಿಗುತ್ತಿದ್ದು, 2024-25ನೇ ಸಾಲಿಗೆ ಕೂಡ ಅರ್ಜಿ ಕೂಡ ಆಹ್ವಾನ ಮಾಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಏನೆಲ್ಲಾ ದಾಖಲೆಗಳು ಸಲ್ಲಿಸಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ವಿವರಕ್ಕಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಈ ಯೋಜನೆಯಡಿ ಕೆಳಕಂಡಂತಹ ಯಂತ್ರೋಪಕರಣಗಳ ಖರೀದಿಗೆ ಮಾತ್ರ ಅನುದಾನ ಸಿಗಲಿದೆ:-

  • * ಮಿನಿ ಟ್ರಾಕ್ಟರ್
    * ಪವರ್ ಟಿಲ್ಲರ್
    * ಎಂ. ಬಿ. ಫ್ಲೂ
    * ಡಿಸ್ಕ್ ಪ್ಲೂ
    * ಪಂಪ್ ಸೆಟ್
    * ಮುಸುಕಿನ ಜೋಳ ಒಕ್ಕಣೆ ಯಂತ್ರ
    * ರೋಟೋವೇಟರ್
    * ಕಳೆ ಕೊಚ್ಚುವ ಯಂತ್ರಗಳು
    * ಪವರ್ ವೀಡರ್
    * ಪವರ್ ಸ್ಪ್ರೇಯರ್ಸ್
    * ಡೀಸೆಲ್ ಪಂಪ್ಸೆಟ್
    * ಫ್ಲೋರ್ ಮಿಲ್
    * ಯಂತ್ರಚಾಲಿತ ಮೋಟೋ ಕಾರ್ಟ್
    * ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು
    * ಇತರೆ ಹೈಟೆಕ್ ಕೃಷಿ ಯಂತ್ರೋಪಕರಣಗಳು

ಸಿಗುವ ಅನುದಾನ:-

* SC/ST ವರ್ಗದ ರೈತರಿಗೆ ಯಂತ್ರೋಪಕರಣಗಳ ಬೆಲೆಯ 90% ಅನುದಾನ ಸಿಗಲಿದೆ
* ಇತರೆ ರೈತರಿಗೆ 50% ಅನುದಾನ ಸಿಗಲಿದೆ

ಅರ್ಹತೆಗಳು:-

  • * 18 ವರ್ಷ ಮೇಲ್ಪಟ್ಟ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯಾವುದೇ ರೈತ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಬಹುದು
    * ಯೋಜನಾ ಘಟಕಕ್ಕೆ ಸಂಬಂಧಿಸಿದ ವಿವರಗಳ ದಾಖಲೆ ಹಾಗೂ ಕೇಳಲಾಗುವ ಇನ್ನಿತರ ಪ್ರಮುಖ ದಾಖಲೆಗಳನ್ನು ಹೆಸರಿನಲ್ಲಿ ಹೊಂದಿರುವಂತಹ ರೈತನು ಅರ್ಜಿ ಸಲ್ಲಿಸಬಹುದು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
  • * ರೈತನ ಆಧಾರ್ ಕಾರ್ಡ್
    * ರೈತರ ಜಮೀನಿನ ಪಹಣಿ ಪತ್ರ
    * ಬ್ಯಾಂಕ್ ಪಾಸ್ ಪುಸ್ತಕ
    * ಇತ್ತೀಚಿನ ಎರಡು ಭಾವಚಿತ್ರ
    * ರೂ. 100 ಛಾಪಾಕಾಗದ
    * ಯೋಜನಾ ಘಟಕದ ವಿವರ
    * ಕೇಳಲಾಗುವ ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
  • ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳ ಪ್ರತಿಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಆಫ್ ಲೈನ್ ನಲ್ಲಿ ರೈತನು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
  •  ಪ್ರಸಕ್ತ ಸಾಲಿನ ವರ್ಷದಲ್ಲಿ ಲಭ್ಯವಿರುವ ಅನುದಾನದ ಆಧಾರದ ಮೇಲೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಕೊಡಲಾಗುವುದು
  •  ಸದ್ಯಕ್ಕಿಗ ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು, ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment