Dairy Farming:
ಕೃಷಿ ಒಂದನ್ನೇ ಅವಲಂಬಿಸಿ ಬದುಕುವ ರೈತರಿಗೆ ಕೃಷಿ ನಿಶ್ಚಿತ ಆದಾಯ ತಂದುಕೊಡುತ್ತದೆ ಎಂದು ಭರವಸೆ ನೀಡಲು ಆಗುವುದಿಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಕೃಷಿಯು ವಾತಾವರಣದ ಮೇಲೆ ನಿರ್ಧಾರ ಆಗಿರುತ್ತದೆ. ಅತಿವೃಷ್ಟಿ / ಅನಾವೃಷ್ಟಿ / ಕೀಟಭಾದೆ ಇದರ ಜೊತೆಗೆ ಸೀಸನ್ ನಲ್ಲಿ ಕನಿಷ್ಠ ಬೆಲೆ ಇಲ್ಲದೆ ಇರುವುದು ಇತ್ಯಾದಿಗಳು ರೈತನ ಸಂಕಷ್ಟಕ್ಕೆ ಕಾರಣಗಳಾಗಿವೆ. ಇದೆಲ್ಲದರ ನಡುವೆ ಭಾರತವು ಮೂಲತಃ ಹಳ್ಳಿಗಳ ದೇಶ ಹಾಗೂ ನಮ್ಮ ದೇಶದ ಹೆಚ್ಚಿನ ಜನರು ಜೀವನೋಪಾಯಕ್ಕಾಗಿ ಕೃಷಿಯನ್ನು ಅನುಸರಿಸುತ್ತಿದ್ದಾರೆ.
ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಯೋಜನೆಗಳ ಮೂಲಕ ಕೃಷಿ ವಲಯಕ್ಕಾಗಿ ಹೆಚ್ಚಿನ ಮೊತ್ತದ ಅನುದಾನವನ್ನು ಮೀಸಲಿಟ್ಟು ಕೃಷಿ ಸಾಲ, ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಸಾಲ, ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ರಸಗೊಬ್ಬರಗಳ ಹಂಚಿಕೆ, ಬೆಳೆ ವಿಮೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳ ಮೂಲಕ ಸಹಾಯಧನ ಹಾಗೂ ಇನ್ನಿತರ ಯೋಜನೆಗಳನ್ನು ಹಮ್ಮಿಕೊಂಡಿದೆ.
ಈಗ ಮುಂದುವರೆದು ಕೃಷಿಗೆ ಹೊಂದಿಕೊಂಡ ಕಸುಬುಗಳಾದ(Dairy Farming) ಹೈನುಗಾರಿಕೆ, ಕುರಿ ಕೋಳಿ ಮೇಕೆ ಸಾಕಾಣಿಕೆಗೂ ಕೂಡ ಪ್ರೋತ್ಸಾಹಿಸುತ್ತಿದೆ. ರೈತನು ಕೃಷಿ ಮಾಡುವುದರ ಜೊತೆಗೆ ಸ್ವಂತ ಉದ್ಯಮ ಆರಂಭಿಸಲಿ ಈ ಮೂಲಕ ಆತನು ಆರ್ಥಿಕವಾಗಿ ಸದೃಢವಾಗಲಿ ಎನ್ನುವ ಉದ್ದೇಶದಿಂದ ಕುರಿ ಕೋಳಿ ಮೇಕೆ ಸಾಕಾಣಿಕೆಗೆ / ಹೈನುಗಾರಿಕೆ/ ಹಂದಿ ಸಾಕಾಣಿಕೆ /ಪಶು ಸಂಗೋಪನೆ /ಮೀನುಗಾರಿಕೆ ಇವುಗಳನ್ನು ಪ್ರೋತ್ಸಾಹಿಸಿ ಇದರ ಸಲುವಾಗಿಯೇ ಸಹಾಯಧನ ಮತ್ತು ಸಾಲ ಸೌಲಭ್ಯ ನೀಡುತ್ತಿದೆ.
ಇದನ್ನು ಪಡೆದುಕೊಳ್ಳುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ನೀಡಬೇಕು ಎನ್ನುವುದರ ವಿವರ ಹೀಗಿದೆ. ಪ್ರಸ್ತುತವಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರೈತರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಮೂಲಕ ಕುರಿ ಕೋಳಿ ಮೇಕೆ ಸಾಕಾಣಿಕೆ ಮತ್ತು ಹೈನುಗಾರಿಕೆ ಅವಲಂಬಿಸಿರುವ ರೈತರಿಗೆ ಶೆಡ್ ಅತ್ಯವಶ್ಯಕ ಹೀಗಾಗಿ ಶೆಡ್ ನಿರ್ಮಾಣಕ್ಕೆ ರೂ.57,000 ದವರೆಗೆ ಸಹಾಯಧನ ನೀಡಲಾಗುತ್ತದೆ.
ಇದಕ್ಕೂ ಹಿಂದೆ ಈ ಯೋಜನೆಯಲ್ಲಿ ರೂ.43,000 ಅನುದಾನ ಸಿಗುತ್ತಿತ್ತು ನಂತರ ಇದನ್ನು ರೂ.57,000 ಕ್ಕೆ ಏರಿಸಲಾಗಿದೆ. ಇದಕ್ಕೆ ವಿಧಿಸಿರುವ ಕಂಡೀಷನ್ ಗಳನ್ನು ಪೂರೈಸುವಂತಹ ಅರ್ಹ ರೈತರು ಸೂಚಿಸಿರುವ ವಿಧಾನದಲ್ಲಿ ಅರ್ಜಿ ಸಲ್ಲಿಸಿ ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ಒದಗಿಸಿ ಸರ್ಕಾರದ ಈ ಯೋಜನೆಗೆ ಲಾಭ ಪಡೆದುಕೊಳ್ಳಬಹುದು. ರಾಜ್ಯದ ಎಲ್ಲ ರೈತರಿಗೂ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಲೇಖನದಲ್ಲಿ ಯೋಜನೆ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಶೇರ್ ಮಾಡಿ.
ಯೋಜನೆಯ ಹೆಸರು:- ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶೆಡ್ ನಿರ್ಮಾಣಕ್ಕೆ ಸಹಾಯಧನ
ಸಿಗುವ ಸಹಾಯಧನ:- ರೂ.57,000 ಸಹಾಯಧನದೊಂದಿಗೆ ಹೆಚ್ಚಿನ ಅಗತ್ಯತೆಗೆ ಸಬ್ಸಿಡಿ ರೂಪದ ಸಾಲ
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಕರ್ನಾಟಕ ರಾಜ್ಯದ ರೈತರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ
* ಅರ್ಜಿದಾರರು ರೈತರಾಗಿದ್ದು ಶೆಡ್ ನಿರ್ಮಾಣಕ್ಕೆ ಸ್ವಂತ ಕೃಷಿ ಭೂಮಿ ಹೊಂದಿರಬೇಕು ಜೊತೆಗೆ ಕುರಿ ಕೋಳಿ ಮೇಕೆ ಸಾಕಾಣಿಕೆ ಅಥವಾ ಹೈನುಗಾರಿಕೆ ಅಥವಾ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರಬೇಕು
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಹೆಚ್ಚಿನ ಆದ್ಯತೆ ಇರುತ್ತದೆ ನಾಲ್ಕು ಜಾನುವಾರಿಗಳಿಗಿಂತ ಹೆಚ್ಚಿನ ಸಂಖ್ಯೆಯ ಜಾನುವಾರುಗಳನ್ನು ಸಾಗುತ್ತಿರುವಂತಹ ರೈತರು ಅರ್ಜಿ ಸಲ್ಲಿಸಬಹುದು
* ಪಶು ವೈದ್ಯಾಧಿಕಾರಿಗಳಿಂದ ದೃಡೀಕರಣ ಪತ್ರ ಪಡೆಯಬೇಕು
* ಈ ಯೋಜನೆಯಡಿ ನಿರ್ಮಾಣ ಮಾಡುವ ಶೆಡ್ 10 ಅಡಿ ಅಗಲ ಇರಬೇಕು, 18 ಅಡಿಗಳ ಗೋಡೆ ಹೊಂದಿರಬೇಕು. 5 ಅಡಿ ಎತ್ತರ ಇರುವ ಗೋಡೆ ಜೊತೆಗೆ ಗೋದಲಿ/ಮೇವು ತೊಟ್ಟಿ ಇದೆಲ್ಲವೂ ಇರಬೇಕು. ಒಳಗೆ ಇರುವ ಜಾನುವಾರುಗಳ ಉಸಿರಾಟಕ್ಕೆ ಗಾಳಿ, ಬೆಳಕು ಬರುವ ಹಾಗೆ ಶೀಟ್ ಗಳನ್ನು ಸಹ ನಿರ್ಮಿಸಬೇಕು.
* ಯೋಜನೆಯ ಸಹಾಯಧನ ರೂ.57,000 ಬಜೆಟ್ ದಲ್ಲಿ, ರೂ.10,556 ಕೂಲಿಗಾಗಿ, ರೂ.46,444 ರೂಪಾಯಿಗಳನ್ನು ಅಗತ್ಯವಿರುವ ವಸ್ತುಗಳನ್ನು ಪಡೆಯಲು ಬಳಸಬಹುದು.
ಬೇಕಾಗುವ ದಾಖಲೆಗಳು:-
- * ಅರ್ಜಿದಾರರ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಶೆಡ್ ನಿರ್ಮಾಣಕ್ಕೆ ಸೂಚಿಸಿರುವ ಜಾಗದ ಬಗ್ಗೆ ದಾಖಲೆಗಳು * ಜಾನುವಾರುಗಳಿಗೆ ಪಡೆದ ವೈದ್ಯಕೀಯ ದೃಡೀಕರಣ ಪತ್ರ
* ನಿಗದಿತ ಅರ್ಜಿ ಫಾರಂ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
- * ಈ ಮೇಲೆ ತಿಳಿಸಿದ ಎಲ್ಲ ದಾಖಲೆಗಳ ಜೊತೆ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿ ಪರಿಶೀಲನೆ ನಡೆಸಿ ವಾರ್ಷಿಕ ಕ್ರಿಯಾ ಯೋಜನೆಗೆ ಸೇರಿಸಿ ಅನುಮೋದಿಸುತ್ತಾರೆ.
* ನಂತರ ಹಣವು ನೇರವಾಗೆ DBT ಮೂಲಕ ರೈತನ ಬ್ಯಾಂಕ್ ಖಾತೆಗೆ ತಲುಪುತ್ತದೆ ಮತ್ತು ಈ ಸಂಬಂಧಿತ ಸಂದೇಶಗಳು ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.
* ಯಾವುದೇ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ಕೊಡಿ.