Loan
ಈಗಿನ ಕಾಲದಲ್ಲಿ ಸುಲಭವಾಗಿ ಸಾಲ ಎಷ್ಟು ಬೇಗ ಸಿಗುತ್ತದೆಯೋ ಅದೇ ರೀತಿಯಾಗಿ ಅತಿ ವೇಗವಾಗಿ ಶೂಲವಾಗಿ ನಮ್ಮ ಜೀವವನ್ನು ಹಿಂಡುತ್ತದೆ. ಆನ್ಲೈನ್ ನಲ್ಲಿ ಕೆಲವೇ ಕಾಗದ ಪತ್ರಗಳ ದಾಖಲೆಗಳಲ್ಲಿ ಸಾಲವನ್ನು ಕೊಡುವ ಬ್ಯಾಂಕ್ ಗಳು ಯಾವುದೇ ಲೇವಾದೇವಿ ವ್ಯವಹಾರಸ್ಥನಿಗಿಂತಲೂ ಕಡಿಮೆ ಇಲ್ಲದೆ ಕ್ರೂರವಾಗಿ ವಸೂಲಿಗೂ ನಿಂತುಬಿಡುತ್ತದೆ.
ಹಿಂದೆಯೂ ಬ್ಯಾಂಕ್ ಗಳಿಂದ ಸಾಲ ವಸೂಲಿಕ್ಕಾಗಿ ಅಧಿಕಾರಿಗಳು ಬರುತ್ತಿದ್ದರು. ಆದರೆ ಅದಕ್ಕೊಂದು ಗತ್ತು ಮತ್ತು ನೀಯತ್ತು ಇರುತ್ತಿತ್ತು. ಆದರೆ ಈಗ ಎಲ್ಲವೂ ರಿಕವರಿ ಏಜೆಂಟ್ ಗಳ ಕೈಗೆ ಕೊಟ್ಟಾಗಿದೆ. ಬ್ಯಾಂಕ್ ಗಳು ಸಾಲ ವಸೂಲಿ ಮಾಡಿಸಲು ರಿಕವರಿ ಏಜೆಂಟ್ ಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ.
ಮತ್ತು ಈ ರಿಕವರಿ ಏಜೆಂಟ್ ಗಳು ಸಾಲ ಪಡೆದ ವ್ಯಕ್ತಿ ಸಮಾಜದಲ್ಲಿ ಎತ್ತರದ ವ್ಯಕ್ತಿಯೇ ಆಗಿರಲಿ ಅಥವಾ ಗೌರವಾನ್ವಿತ ವ್ಯಕ್ತಿಯೇ ಆಗಿರಲಿ ಅಥವಾ ಆ ದಿನಕ್ಕೆ ಆತನ ಕುಟುಂಬದ ಪರಿಸ್ಥಿತಿ ಹೇಗೆ ಇರಲಿ, ತನ್ನ ಕೆಲಸ ಹಣ ವಸೂಲಿ ಮಾಡುವುದು ಅಷ್ಟೇ ಎಂದು ತಿಳಿದುಕೊಂಡು ಅಮಾನವೀಯವಾಗಿ ವರ್ತಿಸಿ ಹಿಂ’ಸಿಸುತ್ತಾರೆ.
ನಮ್ಮ ನಿಮ್ಮ ನಡುವೆ ಈ ರೀತಿ ಸಾಲ ಪಡೆದುಕೊಂಡು ರಿಕವರ್ ಏಜೆಂಟ್ ಗಳ ಕಾಟಕ್ಕೆ ಪ್ರಾಣವನ್ನೇ ಕಳೆದುಕೊಂಡವರ ಉದಾಹರಣೆ ಬಹಳ ಇವೆ. ಆದರೆ ಇಲ್ಲಿ ತುಂಬಾ ಬೇಸರದ ಸಂಗತಿ ಏನೆಂದರೆ, ಈ ರೀತಿ ಆ’ತ್ಮ’ಹ’ತ್ಯೆ ಮಾಡಿಕೊಂಡವರ ಸಾವಿಗೆ ಬ್ಯಾಂಕ್ ಆಗಲಿ ರಿಕವರಿ ಏಜೆಂಟ್ ಗಳಾಗಲಿ ನ್ಯಾಯ ಕೊಡಿಸುವುದಿಲ್ಲ, ಅವರ ಮೇಲೆ ಒಂದು ಕೇಸ್ ಕೂಡ ಆಗುವುದಿಲ್ಲ.
ಹೀಗಾಗಿ ಸಾಲ ಪಡೆದುಕೊಂಡ ವ್ಯಕ್ತಿಯೇ ಧೈರ್ಯವಾಗಿ ಇದನ್ನು ಎದುರಿಸಲು ಕಲಿಯಬೇಕು. ನಮ್ಮ ಜನರು ಬ್ಯಾಂಕ್ ಗಳು ಇರುವುದು ಸಾಲ ಕೊಡುವುದಕ್ಕೆ RBI ಬ್ಯಾಂಕ್ ಗಳಿಗೆ ಲೈಸೆನ್ಸ್ ಕೊಟ್ಟಿರುವುದೇ ಜನರಿಗೆ ಸಾಲ ಕೊಡಲು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಪರಿಸ್ಥಿತಿಗೆ ಸಾಲ ಪಡೆದಿದ್ದೇನೆ ಅಷ್ಟೇ ತೆಗೆದುಕೊಂಡಿದ್ದ ಸಮಯಕ್ಕೆ ಸಾಲ ಕಟ್ಟಲು ಸಾಧ್ಯವಾಗಿಲ್ಲ ಎಂದು ಯಾರಿಗೂ ಹೆದರಿ ಊರು ಬಿಡುವ, ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಹೋಗುವುದು ಬೇಡ ಎಂದು ನಿರ್ಧರಿಸಬೇಕು.
ರಿಕವರಿ ಏಜೆಂಟ್ ಗಳು ಮನೆ ಹತ್ತಿರ ಕಚೇರಿ ಹತ್ತಿರ ಬಂದು ಗಲಾಟೆ ಮಾಡಿದಾಗ ಧೈರ್ಯವಾಗಿ ಅವರನ್ನು ಎದುರಿಸಬೇಕು ಯಾವಾಗ ವ್ಯಕ್ತಿ ಎದುರುತ್ತಾನೆ ಎಂದು ಗೊತ್ತಾಗುತ್ತದೆ ಆಗಲೇ ಇಂತವರ ಮಾತು ಜೋರಾಗುವುದು. ಇದರ ಬದಲು ಸಾಲ ಪಡೆದಿದ್ದೇನೆ, ಕೊಡುತ್ತೇನೆ, ಈಗ ಸಾಧ್ಯವಿಲ್ಲ ಕಾರಣ ಹೀಗಿದೆ ಬ್ಯಾಂಕಿಗೆ ಉತ್ತರ ಕೊಡುತ್ತೇನೆ ಎಂದು ಹೇಳಿ. ಬ್ಯಾಂಕ್ ಸಮಯ ಕೊಡದೇ ಇದ್ದರೆ ಬ್ಯಾಂಕ್ ಗಳು ರಿಕವರಿ ಸೂಟ್ ಹಾಕಿ ಕೋರ್ಟ್ ಗೆ ಹೋಗಿ ಸಾಲ ವಸೂಲಿ ಮಾಡಬಹುದು.
ಕೋರ್ಟ್ ಕೂಡ ಸಾಲ ತೀರಿಸಲು ಸಮಯ ನೀಡುತ್ತದೆ. ಹೀಗಾಗಿ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಇದಕ್ಕಿಂತ ಮುಖ್ಯವಾಗಿ ಮೊದಲು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಬಜೆಟ್ ಮಾಡಿಕೊಳ್ಳಬೇಕು.
ಇಂದು ಹೋಂ ಲೋನ್, ಪರ್ಸನಲ್ ಲೋನ್, ವೆಹಿಕಲ್ ಲೋನ್, ಕಮರ್ಷಿಯಲ್ ಲೋನ್ ಹೀಗೆ ತರಹೆವಾರಿ ಲೋನ್ ಗಳು ಸುಲಭವಾಗಿ ಸಿಗುತ್ತವೆ, ಕ್ರೆಡಿಟ್ ಕಾರ್ಡ್ ಇದೆ ಎಂದು ಮನಸ್ಸೋ ಇಚ್ಛೆ ದುರುಪಯೋಗ ಪಡಿಸಿಕೊಂಡರೆ ಸಾಲದ ಹೊರೆ ಹೇರಿದಾಗ ನಾವೇ ನರಳಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಹಾಸಿಗೆ ಇದ್ದಷ್ಟು ಕಾಲು ಚಾಚುವ, ನಿಧಾನವಾಗಿ ಬೆಳೆಯುವ, ಇನ್ನೊಬ್ಬರಿಗೆ ಕಂಪೇರ್ ಮಾಡಿಕೊಳ್ಳದೆ ನಿಮ್ಮ ಜೀವನವನ್ನು ಶ್ರೀಮಂತವಾಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನೆಮ್ಮದಿಯಾಗಿ ಕಳೆಯುತ್ತ ಮನಸ್ಸು ಮಾಡಿ ಹೆದರದೆ ಧೈರ್ಯವಾಗಿ ಮುನ್ನುಗ್ಗಿ.